Friday, February 11, 2011

ನಾಕು ತಂತಿ



ಈ ಸಾಲುಗಳನ್ನು ಓದಿದಾಗೆಲ್ಲ ನನಗೆ ಮರಳಿ ಊರಿಗೆ ಹೋಗಬೇಕು ಅನಿಸೋದು. ಮರಳಿ ನಮ್ಮ ಮಣ್ಣಿಗೆ ಹೋಗೋದರಲ್ಲಿಯೇ ಸುಖವಿದೆ ಅಂತ ಓದಿದ ಯಾರಿಗೂ ಒಮ್ಮೆ ಅನಿಸದೇ ಇರದು.  ಅಷ್ಟು ಚೆನ್ನಾಗಿ ದ. ರಾ. ಬೇಂದ್ರೆ ಅವರು ಬರೆದಿದ್ದಾರೆ. ಅವರ ಕವನ ಸಂಕಲನ "ನಾಕು ತಂತಿ" ಯಲ್ಲಿ ಬರೆದಿದ್ದು, ನೀವೂ ಒಮ್ಮೆ ಓದಿ ನೋಡಿ


ನಾಕು ತಂತಿ

ಬಾರೋ ಸಾಧನಕೇರಿಗೆ
ಮರಳಿ ನಿನ್ನೀ ಊರಿಗೆ
ಮಳೆಯು ಎಳೆಯುವ ತೇರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣಕೊಂದು ಬಿದ್ದಿದೆ,
ನೋಟ ಸೇರದು ಯಾರಿಗೆ
ಬಾರೋ ನಿನ್ನೀ ಊರಿಗೆ
ಮರಳಿ ಸಾಧನಕೇರಿಗೆ....
- ದ ರಾ ಬೇಂದ್ರೆ

ಸ್ಥಳ ಪರಿಚಯ:- ಸಾಧನಕೇರಿ ಅನ್ನೋದು ಧಾರವಾಡದಲ್ಲಿ ಅವರು ಇದ್ದ ಸ್ಥಳದ ಹೆಸರು, ಜೊತೆಗೆ ಅಲ್ಲೊಂದು ಸುಂದರ ಕೆರೆಯೂ ಇದೆ. ದ ರಾ ಬೇಂದ್ರೆ ಯವರು ಹೆಚ್ಚಾಗಿ ಅಲ್ಲೇ ಕುಳಿತು ಕೆಲವು ಕವನಗಳನ್ನ ಬರೆದಿದ್ದಾರೆ. ಈಗ ಅಲ್ಲೊಂದು ಸುಂದರ ಸ್ಮಾರಕವನ್ನು ಮಾಡಿದ್ದರೆ. ಧಾರವಾಡ ಕಡೆಗೆ ಬಂದಾಗ ಒಮ್ಮೆ ನೋಡಿ ಬನ್ನಿ  

Thursday, February 10, 2011

ಹೆಣ್ಣು ಮಕ್ಕಳು

Written on 05-05-1999

ಹೆಣ್ಣು  ಮಕ್ಕಳು

ಚಿಕ್ಕವರಿದ್ದಾಗ - ನೀರಿಗಾಗಿ ಜಗಳಾಡುವರು
ನೀರು ತಂದೇ ತರುವೆನು ಎಂದು.
ದೊಡ್ಡವರಾದಾಗ - ನೀರಿಗಾಗಿ ಜಗಳಾಡುವರು
ನೀರು ತರಲು ನಾನೊಲ್ಲೆ ಎಂದು.




ವಸಂತ ಋತು

 Written on 29/01/1999                                                    


                                               ವಸಂತ ಋತು 

ಬಂದಿದೆ, ಮತ್ತೆ ಬಂದಿದೆ
ವಸಂತ ಋತು ಮತ್ತೆ ಬಂದಿದೆ.
ಯುಗ ಯುಗ ಕಳೆದರೂ ಯುಗಾದಿ ಬರುವಂತೆ
ಋತು ಋತು ಉರುಳಿದರೂ ಮತ್ತೆ ವಸಂತ ಋತು ಬಂದಿದೆ.


ಅಳುಮುಂಜಿಯಂತೆ ಮುಖ ಮಾಡಿದ್ದ ಎಲೆಗಳೆಲ್ಲ
ಈ ಋತುವಿನಲ್ಲಿ ಹೊಸ  ಉಲ್ಲಸವ ತೋರುತಿವೆ.
ಬಂಜೆಯಂತಿದ್ದ ಗಿಡ ಮರಗಳೆಲ್ಲ ಹಣ್ಣುಕಾಯಿ ಬಿಡಲು
ಹೂಬಿಟ್ಟು ಬಸುರಿಯಂತೆ ತಾಯ್ತನ ತೋರುತಿವೆ.


ಎಲ್ಲ ಋತುಗಳಲ್ಲಿ ತನ್ನ ಹಾಡನ್ನು ಅದುಮಿಟ್ಟ ಕೋಗಿಲೆ
ಇದೆ ಋತುವಿನಲ್ಲಿ ಸಹನೆಯೊಡೆದು "ಕುಹೂ ಕುಹೂ" ಎನ್ನುತಿದೆ.


ವಿರಹದ ಬೆಂಕಿಯಲಿ ಬೇಯುತಿರುವ ಪ್ರಿಯತಮೆ
ಈ ಋತುವಿನ ಮುಂಜಾವ ತಂಪಿನಲಿ ಇನಿಯನ ನೆನೆಯುತ
ಆತನ ಸೇರಲು ಕನವರಿಸುತಿಹಳು.


ಉಲ್ಲಾಸ, ಈ ಋತುವಿನಲ್ಲಿ ಎಲ್ಲೆಲ್ಲಿ ನೋಡಿದರೂ ನವೋಲ್ಲಾಸ
ಗಿಡಮರಗಳ ಹೂಎಲೆಗಳಲ್ಲಿ,
ಕೋಗಿಲೆಯ ಹಾಡಲ್ಲಿ,
ಪ್ರೇಮಿಗಳ ಮಿಲನದಲ್ಲಿ..... ನವೋಲ್ಲಾಸ.


ನೋಡಿದಲ್ಲೆಲ್ಲ ಉಲ್ಲಾಸ
ಕೆಳಿದಲ್ಲೆಲ್ಲ ಒಂದಾದ ಸಂಕೇತವೆಂಬಂತೆ ಋತುಗನಗಳು!!!




ನಿಮ್ಮ
ರವಿ