Friday, November 19, 2010

Shankar Nag: ಅವರ ಕೊನೆಯ ಮಾತುಗಳು..

ನಾವು ನೀವು ಚಿಕ್ಕವರಿದ್ದಾಗ "ಮಾಲ್ಗುಡಿ ಡೇಸ್" ಎಂಬ ಧಾರವಾಹಿ ನೋಡ್ತಾ ಇದ್ವಿ. ಆದನ್ನ ನೋಡಿ ಇವಾಗ ತುಂಬಾ ವರ್ಷಗಳು ಆಗಿವೆ. ಇವತ್ತು ನಾವು ನೀವು ಬೆಳೆದು ದೊಡ್ದವರಗಿದ್ದಿವಿ, ನಮ್ಮಲ್ಲಿ ಕೆಲವರಿಗೆ ಮಕ್ಕಳೂ ಅಗಿದಾವೆ, ಆ ಮಕ್ಕಳೂ ಬೆಳೆದು ದೊಡ್ಡವರಾಗಿದ್ದಾರೆ. ನಾವೆಲ್ಲ ಶಂಕರ್ ನಾಗ್ ಅವರ ಚಿತ್ರ ಗಳನ್ನ ನೋಡಿದ್ದೇವೆ ಅಲ್ವಾ.  ಇವತ್ತು ನಮ್ಮ ಕರ್ನಾಟಕ ಬಿಟ್ಟು ಈ ದೇಶದಲ್ಲಿ ಯಾವುದೇ ಊರಿಗೆ ಹೋಗಿ ಅಲ್ಲಿ ಜನರ ಮುಂದೆ "ಮಾಲ್ಗುಡಿ ಡೇಸ್" ಅಂದ್ರೆ ಸಾಕು ಎಲ್ಲರ ತೆಲೇಲಿ " ತಂದಾನ ತಾನ ನಾ ನಾ ನಾ..." ಅನ್ನೋ ರಾಗ ಬರದೆ ಇರೋಲ್ಲ. ಆ ಒಂದು ಒಳ್ಳೆಯ ಧಾರವಾಹಿ ಕೊಟ್ಟಿದ್ದು ನಮ್ಮವರೆ ಆದ ಶಂಕರ್ ನಾಗ್ ಅಂತ ಹೇಳಿಕೊಳ್ಳೋಕೆ ಖುಷಿ ಆಗುತ್ತೆ ಹಾಗೇ ಇವತ್ತು ಅವರು ಇದ್ದಿದ್ದರೆ ಎಷ್ಟು ಒಳ್ಳೇದು ಅಲ್ವಾ!! ಅಂತ ದುಖ:ನೂ ಆಗುತ್ತೆ.


ಆ ದಿನ ನನಗೆ ಇನ್ನೂ ನೆನಪಿದೆ. ರೇಡಿಯೋ ದಲ್ಲಿ ಅವರ ಅಪಘಾತ ಆಗಿರೋ ಸುದ್ದಿ ಕೇಳಿದಾಗ, ಸ್ಕೂಲ್ ಅಲ್ಲಿ ಎಲ್ಲರೂ ಅದನ್ನೇ ಮಾತಾಡುವಾಗ ಅಮ್ಮನ ಹತ್ರ ಹೋಗಿ ಕೇಳಿದ್ದೆ ಶಂಕರ್ ನಾಗ್ ನಿಜವಾಗಲು ತೀರಿಕೊಂದ್ರಾ? ಅದ್ದಕ್ಕೆ ಅಮ್ಮ "ಇಲ್ಲ ವೀರಪ್ಪನ್ kidnap ಮಾಡಿದಾನೆ, ಬೇಗ ಬಿಡುಗಡೆ ಮಾಡ್ತಾನೆ". ಅಮ್ಮ ಹಾಗೇ ಹೇಳಿದ ಮೇಲೆ ಸಮಾಧಾನ ಆಯಿತು. ಹಾಗೇ ಶಂಕರ್ ನಾಗ್ ಹೀರೋ ಥರ ವಾಪಾಸ್ ಬರ್ತಾರೆ ಅಂತ hopes ಬಂತು. ಆದರೆ ಮಾರನೆ ದಿನ ಸ್ಕೂಲ್ ಗೆ  ಹೋದಾಗ ನಿಜವಾಗ್ಲೂ ಸತ್ರು ಅಂತ ಸ್ಕೂಲ್ ತುಂಬಾ ಸುದ್ದಿ ಆಗಿತ್ತು. ಹಾಗಾದ್ರೆ ಇನ್ನು ಶಂಕರ್ ನಾಗ್ ವಾಪಾಸ್ ಬರಲ್ಲ ಅಂತ ಅವತ್ತು ಖಾತ್ರಿ ಆಯಿತು ಹಾಗೇ ಬೇಜಾರೂ ಆಯಿತು. ಆ ದಿನ ನಾನೊಬ್ಬನೇ ಅಲ್ಲ ಇಡೀ ಕರ್ನಾಟಕ ಜನ ನನ್ನಥರಾನೆ hopes ಕಳಕೊಂಡರು. ಆ ದಿನ ಮತ್ತೆ ಅಮ್ಮನ ಹತ್ರ ಹೋಗಿ "ಯಾಕೆ ಶಂಕರ್ ನಾಗ್ ಗೆ ಇನ್ನು ವಯಸ್ಸು ಆಗಿರಲಿಲ್ಲ, ಮತ್ಯಾಕೆ ಬೇಗ ಸತ್ರು?" ಅಂತ ಕೇಳಿದ್ದೆ. ಅದಕ್ಕೆ ಅಮ್ಮ "ಆ ದೇವರಿಗೆ ಯಾರು ತುಂಬಾ ಇಷ್ಟನೋ ಅವರನ್ನ ಬೇಗ ಕರಕೊಂಡು ಹೋಗ್ತಾನೆ" ಅಂತ ಹೇಳಿದರು. "ಆ ದೇವರು ಹೀಗೆ ಯಾಕೆ ಮಾಡ್ತಾನೆ?" ಅಂತ ಕೇಳಿದ್ದೆ. ಅಮ್ಮನ ಹತ್ರ ಉತ್ತರ ಇರಲಿಲ್ಲ....

ಈ ದಿನ ನಾವು ಕರ್ನಾಟಕದ ಯಾವ ಊರಿಗೆ ಹೋದರೂ ಆ ಊರಲ್ಲಿ atleast ಒಂದು ಅದರೂ ಆಟೋ ಮೇಲೆ ಶಂಕರ್ ನಾಗ್ ಪೇಂಟಿಂಗ್ ಇರದೇ ಇರಲ್ಲ. ಬರೀ ಆಟೋ ದವರು ಅಂತ ಅಲ್ಲ, ಇನ್ನೂ ಜನ ಶಂಕರ್  ನಾಗ್ ಅಂದ್ರೆ ಆ ಪ್ರೀತಿ ಹಾಗೇ ತಮ್ಮ ಹೃದಯಲ್ಲಿ ಹಾಗೇ ಬೆಚ್ಚಗೆ ಇಟ್ಟು ಕೊಂಡಿದ್ದಾರೆ, ಹಾಗೇ ಅವರ ಬಗ್ಗೆ ಹೆಮ್ಮ, ಅಭಿಮಾನ ಕೂಡ. ಇಷ್ಟೊಂದು ಪ್ರೀತಿನ ಅಷ್ಟು ಚಿಕ್ಕ ವಯಸ್ಸಲ್ಲಿ ಪಡೆದಿರೋದು ಅಂದ್ರೆ ಶಂಕರ್ ನಾಗ್ ಮಾತ್ರ!! ಅಷ್ಟು ಚಿಕ್ಕ ವಯಸಲ್ಲಿ ಅವರು ಮಾಡಿರೂ ಸಾಧನೆ ಕೂಡ ಅದ್ಭುತ. ಇವತ್ತು ಅವರು ಇದ್ದಿದ್ದರೆ ಪಕ್ಕಾ ಅಂತರ್ ರಾಷ್ಟೀಯ  ಮಟ್ಟಕೆಲ್ಲ ಒಳ್ಳೆ ಹೆಸರು ಮಾಡ್ತಿದ್ರು. ನನಗೇ ಕೆಲವೊಮ್ಮೆ ಅನಿಸೋದು : ಶಂಕರ್ ನಾಗ್, ರಾಜಕುಮಾರ್, ವಿಷ್ಣುವರ್ಧನ್ ಇವರೆಲ್ಲ ಇವತ್ತಿನ ಜಮಾನ ದಲ್ಲಿ film industry enter ಆಗಬೇಕಿತ್ತು, ಆಗ ನಮ್ಮ ಕನ್ನಡ film industry ನಾ ಹಿಡಿಯೋರೆ ಇರ್ತಿರಲಿಲ್ಲ. ಹಂಗೆ ಎದೆ ಉಬ್ಬಿಸಿಕೊಂಡು ಮೆರಿತಿದ್ವಿ.  ಆದರೆ ಆ ದೇವರು ಹಾಗೇ ಅಲ್ವಾ, ನಮಗೆ ಗೊತ್ತಾಗದ ಹಾಗೇ ಸ್ವಲ್ಪ ಸ್ವಲ್ಪ ಕೊಡ್ತಾನೆ ಹಾಗೇ ಸ್ವಲ್ಪ ಸ್ವಲ್ಪ ತೊಗೊಂಡು ಬಿಡ್ತಾನೆ. ನಂತರ ನಮ್ಮ ಜೊತೆ ಇರೋದು ಬರಿ ಆ ನೆನಪುಗಳು ಮಾತ್ರ!! ಇವತ್ತು ನಮ್ಮ ಮಕ್ಕಳಿಗೆ, ನಮ್ಮ ಕಾಲದಲ್ಲಿ  ಇವರೆಲ್ಲ ಹೀಗಿದ್ದರು ಹಾಗಿದ್ದರು ಅಂತ ನಾವು ನೀವು ಹೇಳಿ ಸಮಾಧಾನ ಮಾಡ್ಕೊಬೇಕು ಅಷ್ಟೇ!!     






  
ಶಂಕರ್ ನಾಗ್ ಅವರು ಏನೇನು ಮಾಡಿದಾರೆ ಅಂತ ಹೇಳೋವಷ್ಟು ದೊಡ್ಡ ಮನುಷ್ಯ ನಾನಲ್ಲ. "ಮಾಲ್ಗುಡಿ ಡೇಸ್" ಅವರು ಮಾಡಿರೋ ಒಂದು ಧಾರವಾಹಿ ಉದಾಹರಣೆ ಕೊಟ್ಟೆ ಅಷ್ಟೇ. ಈ ಎರೆಡು ವಾರಗಳ ಹಿಂದೆ ಅವರ ಒಂದು ಮಾತು ಕಥೆ ನೋಡಿದೆ. ಆ ದಿನಗಳಲ್ಲಿ "ವಿವಿಧಭಾರತಿ" ರೇಡಿಯೋ station ನಲ್ಲಿ ಅವರು 30 ನಿಮಿಷ ಒಂದು  interview ಕೊಟ್ಟಿದ್ದರು ಆದನ್ನ ಎಲ್ಲರಿಗೂ ಹಂಚಿಕೊಬೇಕು ಅನಿಸ್ತು. ಅವರ ಮಾತುಗಳು ಕೇಳ್ತಾ ಇದ್ರೆ ಅವರು ನಮ್ಮ ಜೊತೇನೆ ಇದಾರೆ ಅನಿಸುತ್ತೆ, ಹಾಗೇ ಗೊತ್ತಿಲ್ಲದೇ ಮನಸು ಭಾರ ಆಗುತ್ತೆ. ಇದನ್ನೆಲ್ಲಾ  ಸುಮ್ಮನೆ FB ಅಲ್ಲಿ share ಮಾಡಿ ಎರೆಡು ನನ್ನ profileನಲ್ಲಿ  ಇದ್ದು ಮರೆ ಆಗೋದೂ, ಆಮೇಲೆ ನಾನು ಕೂಡ ಮರೆಯೋದೂ ಬೇಡ, ಖಾಯಂ ಆಗಿ ಇದು share ಆಗ್ತಾ ಇರಬೇಕು ಅಂತ ಇದನ್ನ ಇಲ್ಲಿ ಹಾಕ್ತಾಇದೀನಿ. ನಿಮಗೂ ಇದು ಇಷ್ಟ ಅಗೇ ಆಗುತ್ತೆ ಅಂತ ನನಗೇ ೧೦೦% ಭರವಸೆ ಇದೆ. ಇದನ್ನ ನಿಮ್ಮ ಗೆಳೆಯ ಗೆಳತಿಯರಿಗೂ ಕೇಳಿಸಿ  ಅವರೂ ಕೇಳಿ ಒಂದು ಕ್ಷಣ ಖುಷಿ ಪಡಲಿ.          

ಶಂಕರ್ ನಾಗ್ ಅವರ ಒಂದು ನೆನಪಿನಲ್ಲಿ ಅವರ ಮಾತುಗಳು ಅವರ ಧ್ವನಿಯಲ್ಲೇ ಕೇಳಿ.......

ಕೊನೆಗೊಂದು ಮಾತು ಈ techonology ಗಳು ನಮಗೆ ಎಷ್ಟು ಸಹಾಯ ಮಾಡಿವೆ!! ಅದು ಇಲ್ಲದ ಇದ್ರೆ ಮೊದಲು ನಾನು ಈ ಮಾತುಗಳು ಕೇಳ್ತಾ  ಇರಲಿಲ್ಲ, ಇಂದು ಇದನ್ನ ನಿಮಗೂ ಹೇಳೋಕೆ ಆಗ್ತಾ ಇರಲಿಲ್ಲ...

Interview part 1



Interview Part 2



Interview Part 3

1 comment: